Sunday, March 27, 2011

ಕುಟುಕುವ ಚುಟುಕ ...

ನನ್ನ ಕೇಳಿದನೊಬ್ಬ ಏನು ಪ್ರಾಸ, ಛಂದಸ್ಸು
ಇದರಿಂದ ಸಾದ್ಯವೇ ಜಾಸ್ತಿ ಆಯುಸ್ಸು
ನಾನೆಂದೆ , ಇದು ಮುಖ್ಯ ಗಳಿಸಲಿಕೆ ಭೇಷು !
ಇಲ್ಲವಾದರೆ ಗಳಿಸಬಹುದಲ್ಲ ಕಾಸು ?!

ರಕ್ತಕ್ಕು ಸ್ವಾರ್ಥಕ್ಕೂ ಎಲ್ಲಿಹುದು ನಂಟು ?
ಸ್ವಾರ್ಥವಿರುವುದು ಇದ್ದಲ್ಲಿ ಗಂಟು
ಈಗಾಗುತಿಹುದಲ್ಲ , ಇಲ್ಲೆಲ್ಲಾ ಉಂಟು
ರಕ್ತದಾನವಿದಲ್ಲ , ಬರಿ ಆಕ್ಸಿಡೆಂಟು !!
 
ಕವಿರಾಯ ನೀ ಕೇಳು ನನ್ನ ಕೈಲಿದೆ ಗನ್ನು
ಇದಕಿಂತ ಹರಿತವೆ ನಿನ್ನ ಕೈಲಿಹ ಪೆನ್ನು ?
ಈ ಪ್ರಶ್ನೆಗುತ್ತರವ ಆಮೇಲೆ ಕೇಳು
ಮೊದಲಾಗಲಿ ಹಸಿದವಗೆ ಹಾಲು,ಬನ್ನು !!

ಮಗುವೆ ನೀ ಕೇಳು ಈ ಜಗದೊಳಿಟ್ಟಿಹರು ಎಲ್ಲಾ
ಸುಣ್ಣ ತಿನ್ನುವುದ್ಯಾಕೆ ಇಹುದಲ್ಲ ಬೆಲ್ಲ !
ನಿನ್ನ ನಗುವನೇ ನಂಬಿ ಕುಳಿತವರು ಇಹರು
ನೀನತ್ತೆ ಎಂದರೆ ಅವರ್ಯಾರು ನಗರು!!

ಈ ಕಷ್ಟ ಸುಖಗಳಿವು ತಿಳಿದಂತೆ ಜೇಪಿ !
ಟೀ ಕುಡಿದಾದ ಮೇಲ್ ನೆನೆದಂತೆ ಕಾಪಿ!!
ಸಿಗದ ವಸ್ತುಗಳಿಲ್ಲ ಈ ಜಗದಿ ಕೇಳು
ಇರುವಲ್ಲಿವರೆಗೆ ನೀ ನಗುನಗುತ ಬಾಳು ..






No comments: